ಗೋವನ್ ಲೈಸಿಟಿ ಫಿಲಂಸ್ ಲಾಂಛನದಲ್ಲಿ ಕಾರವಾರದ ಹಳಗಾವ ಸೇವರಿನೋ ಫರ್ನಾಂಡೀಸ್ ಕಥೆ-ನಿರ್ಮಾಣದ ಪ್ಲಾನಿಂಗ್ ಕೊಂಕಣಿ ಚಿತ್ರವು ಕಾರವಾರದಲ್ಲಿ ಚಿತ್ರೀಕರಣ ಸಾಗುತ್ತಿದೆ. ಈ ಚಿತ್ರಕ್ಕೆ ಮಾರ್ಚ್ ತಿಂಗಳಲ್ಲಿ ಮುಹೂರ್ತ ಆಚರಿಸಿದ್ದು ಅಂದು ಬಂಜಿ ರೊಸಾರಿಯೋ ಕ್ಲಾಪ್ ತೋರಿದಾಗ ವಂದನೀಯ ಗುರುಗಳಾದ ಫಾದರ್ ಆಸ್ಕರ್ ಕ್ವಾಡ್ರಸ್ ರವರು ಕ್ಯಾಮೆರಾ ಚಾಲನೆ ಮಾಡಿ ಆಶೀರ್ವಾದ ಮಾಡಿದ್ದರು. ನಂತರ ಇತ್ತೀಚೆಗೆ ನಡೆಯುತ್ತಿರುವ ಚಿತ್ರೀಕರಣದಲ್ಲಿ ನಾಯಕ ಥಪನ್ ಆಚಾರ್ಯ,ನಾಯಕಿ ಸೆಸಿಲ್ ಅಭಿನಯದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರಕ್ಕೆ ರಾಜೇಶ್ ಫರ್ನಾಡೀಸ್ ನಿದೇಶಕರು ಈ ಹಿಂದೆ ಇವರು ಪಾದ್ರಿ (ಕೊಂಕಣಿ) ಹಾಗೂ ಮನ್ಮಥ, ಸಿಐಡಿ. ಈಶ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರದ ಛಾಯಾಗ್ರಹಣ - ರಮೇಶ್ ಬಾಬು. ಸಂಗೀತ -ವಿನಯ್ ರಾಜ್, ಕಂಬಿರಾಜ್ - ಹೈಟ್ ಮಂಜು - ನೃತ್ಯ, ಸಾಹಸ-ಥ್ರಿಲ್ಲರ್ ಮಂಜು, ಸಮಾಜಮುಖಿಯಾಗಿ ಒಳ್ಳೆಯ ಜನ ಮಾಡುವ ಪ್ಲಾನಿಂಗ್ ಮತ್ತು ಕೆಟ್ಟ ಮನೋಭಾವದ ಜನ ಮಾಡುವ ಪ್ಲಾನಿಂಗ್ ಮಧ್ಯೆ ನಡೆಯುವ ಜಟಾಪಟಿ, ಪ್ರತೀಕಾರ ಮತ್ತು ಅದರಿಂದಾಗುವ ಪರಿಣಾಮಗಳನ್ನೊಳಗೊಂಡ ಚಿತ್ರಕಥಾವಸ್ತುವಾಗಿದೆ.